`ನಿಂಬೆಹುಳಿ` ಸಿದ್ದ
Posted date: 11 Mon, Nov 2013 – 08:46:25 AM

ಮುಕ್ತ ಆರ್ಟ್ಸ್ ಲಾಂಛನದಲ್ಲಿ ಸುಭಾಷ್ ಗಯ್ ಅವರು ನಿರ್ಮಿಸಿರುವ ‘ನಿಂಬೆಹುಳಿ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯುಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಡಿಸಂಬರ್‌ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

  ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ  ಮಾಡಿರುವ  ಹೇಮಂತ್ ಹೆಗ್ಡೆ ಈ ಚಿತ್ರದ ನಾಯಕರು ಹೌದು. ಮಧುರಿಮಾ, ಕೋಮಲ್‌ಜಾ, ನಿವೇದಿತಾ, ಓಂಪ್ರಕಾಶ್‌ರಾವ್, ಬುಲೆಟ್ ಪ್ರಕಾಶ್, ರಮೇಶ್‌ಭಟ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
    ವೀರಸಮರ್ಥ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಸಂದೀಪ್‌ಕುಮಾರ್ ಅವರ ಛಾಯಾಗ್ರಹಣವಿದೆ. ಜಾಲಿಬಾಸ್ಟಿನ್ ಸಾಹಸ ನಿರ್ದೇಶನ, ಮುರಳಿ, ಚಂದ್ರಮಯೂರ್, ಶಂಕರ್ ನೃತ್ಯ ನಿರ್ದೇಶನವಿರುವ ‘ನಿಂಬೆಹುಳಿಗೆ ಸೌಂದರ್‌ರಾಜ್ ಅವರ ಸಂಕಲನವಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed